ವಿಷಯಕ್ಕೆ ಹೋಗಿ

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್


 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್.
ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮಾಚಿ ಸಬೂಬು ಹೇಳಿ ನಂಬಿಸಿದ್ದರು, ಆದರೆ, ಕಾಲೇಜು ಮೆಟ್ಟಿಲು ಮುಟ್ಟುವಷ್ಟರಲ್ಲೇ ವಿಲ್ಸನ್‌ಗೆ ಸತ್ಯದ ಅರಿವಾಯಿತು, ಆಗ ಅವರು ಆತ್ಮಹತ್ಯೆಗೂ ಮುಂದಾಗಿದ್ದರು.
ಸ್ವಲ್ಪ ದಿನಗಳ ನಂತರ ತನ್ನೊಳಗಿನ ಸಕಾರಾತ್ಮಕ ಆಲೋ
1986ರಲ್ಲಿ ಸಪಾಯಿ ಕರ್ಮಚಾರಿ ಆಂದೋಲನ ಕಟ್ಟಿ ಅಂದಿನ ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಕೆ ಶೆಟ್ಟಿಗಾರ್ ಅವರ ವಿರುದ್ಧ ಹೋರಾಟ ನಡೆಸಿದ ವಿಲ್ಸನ್ ಬಿಜಿಎಂಲ್ ಸ್ವಾಮ್ಯದಲ್ಲಿದ್ದ ತೆರದ ಒಣ ಶೌಚಾಲಯ(ಡ್ರೆ ಲ್ಯಾಟ್ರೀನ್)ಗಳನ್ನು ನಾಶ ಪಡಿಸಬೇಕು, ಮಲಹೊರುವ ಅಮಾನವೀಯ ಪದ್ಧತಿ ನಿಷೇಸಬೇಕು, ತಪ್ಪಿದರೆ ಅವರ ವಿರುದ್ಧ ಮೊಕದ್ದೆಮೆ ದಾಖಲಿಸಲಾಗುವುದು ಎಂದು ಹೋರಾಟದ ಎಚ್ಚರಿಕೆಯನ್ನು ನೀಡಿದರು. ಇದರ ಪರಿಣಾಮ ತೆರದ ಒಣ ಶೌಚಾಲಯಗಳನ್ನು ತೆರವುಗೊಳಿಸಿ, ನೀರು ಹಾಕಿ ಶುಚಿಗೊಳಿಸುವ ಕಮೋಡ್‌ಗಳನ್ನು ಅಳವಡಿಸಲಾಯಿತು.
ಇಡೀ ಇಂಡಿಯಾ ದೇಶದಲ್ಲಿ ಮನುಷ್ಯರಿಂದ ಮಲ ಸಾಗಿಸುವ ಕ್ರಿಯೆ (ಮ್ಯಾನುಯಲ್ ಸ್ಕ್ಯಾವೇಂಜ್)ಯನ್ನು ನಿಲ್ಲಿಸುವವರೆಗೂ ನನಗೆ ವಿಶ್ರಾಂತಿ ಇಲ್ಲವೆಂದು ಪಣ ತೊಟ್ಟ, ವಿಲ್ಸನ್, ಕೋಲಾರದಿಂದ ಅಂದ್ರ ಪ್ರದೇಶಕ್ಕೆ ತೆರಳಿ ಅಲ್ಲಿಯೂ ಮಲಹೊರುವ ಪದ್ಧತಿಯ ವಿರುದ್ಧ ಆಂದೋಲನವನ್ನು ವಿಸ್ತರಿಸಿದರು. ಇದರ ಪರಿಣಾಮವಾಗಿ 1993ರಲ್ಲಿ ಕೇಂದ್ರ ಸರಕಾರ ಮಲಹೊರುವ ಪದ್ಧತಿಯನ್ನು ನಿಷೇಸಿತು. ಸದರಿ ಮಸೂದೆ ಅನುಷ್ಠಾನಕ್ಕಾಗಿ ತನ್ನ ಹೋರಾಟವನ್ನು ಮುಂದುವರೆಸಿದರು. 2003ರಲ್ಲಿ ದೇಶದ ಸರ್ವೊಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದರು. ಇದರ ಪರಿಣಾಮವಾಗಿ ಸುಪ್ರೀಂ ಕೋರ್ಟ ಮಲಹೊರುವ ಪದ್ಧತಿ ನಿಷೇಸಿ ದೇಶಾದ್ಯಂತ ಕಟ್ಟುನಿಟ್ಟಿನ ಜಾರಿಗೆ ಆದೇಶಿಸಿತು. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೂ ಸೂಚಿಸಿತು. ಈ ಮೂಲಕ ಮಲಹೊರುವ ಕಾರ್ಮಿಕರ ವಿಮೋಚನೆಗೆ ದಾರಿ ದೀಪವಾಯಿತು.
 ಬಿಜಿಎಂಎಲ್‌ನಲ್ಲಿ 210 ಡ್ರೆ ಲ್ಯಾಟ್ರಿನ್‌ಗಳು : ಬಿಜಿಎಂಎಲ್‌ನಲ್ಲಿ 210 ಡ್ರೆ ಲ್ಯಾಟ್ರಿನ್‌ಗಳು ಇದ್ದವು ಕಾರ್ಖಾನೆಗೆ ಸೇರಿದ ಎಂ.ವೈ.ಕೆ 1287 ಟ್ರ್ಯಾಕ್ಟರ್ ಗಾಡಿ ಇಡೀ ಕೆ.ಜಿ.ಎಪ್ ನಗರಕ್ಕೇ ಪ್ರಸಿದ್ಧಿಯಾಗಿತ್ತು, ಏಕೆಂದರೆ ಈ ಟ್ರ್ಯಾಕ್ಟರ್ ಗಾಡಿ ಮೂಲಕವೇ ಇಡೀ ಬಿಜಿಎಂಎಲ್ ವ್ಯಾಪ್ತಿಯ ಶೌಚಾಲಯಗಳ ಮಲವನ್ನು ತುಂಬಿಸಿಕೊಂಡು ಹೋಗಲಾಗುತ್ತಿತ್ತು. ಈ ಗಾಡಿ ರಸ್ತೆಯಲ್ಲಿ ಓಡಾಡುವಾಗ ಆಂಬುಲೆನ್ಸ್‌ಗೆ ಹೇಗೆ ರಸ್ತೆ ಬಿಡಲಾಗುತ್ತಿತ್ತೋ ಅದೇ ರೀತಿ ಬಿಡಲಾಗುತ್ತಿತ್ತು. ಜೊತೆಗೆ ಬೆಳಗಿನ ಜಾವ ಮತ್ತು ಸಂಜೆ ಸಮಯದಲ್ಲಿ ಈ ಗಾಡಿ ಓಡಾಡುವಂತಿರಲಿಲ್ಲ. ಮಲ ತುಂಬಿಸಿಕೊಂಡ ಈ ಗಾಡಿ ಸ್ಕೂಲ್ ಆಪ್ ಮೈನ್ಸ್ ಹಿಂಭಾಗದ ಕೃಷ್ಣಾವರಂ ಹಳ್ಳದಲ್ಲಿ ಎಲ್ಲಾ ಮಲವನ್ನು ಸುರಿಯುತ್ತಿತ್ತು.
1986ರ ನಂತರ ಕೆಲವು ಪೌರಕಾರ್ಮಿಕರನ್ನು ಮಲ ತೆಗೆಯುವ ಕೆಲಸದಿಂದ ಮುಕ್ತಿಗೊಳಿಸಿ ಇತರೆ ಕೆಲಸಗಳಿಗೆ, ಅಂದರೆ ಅಕಾರಿಗಳ ಮನೆಗಳ ತೋಟದ ಮಾಲಿಗಳಾಗಿ, ಬಟ್ಟೆ ತೊಳೆಯಲು, ಕಸ ಗುಡಿಸುವುದು, ಮನೆಗಳಲ್ಲಿನ ಶೌಚಾಲಯ ತೊಳೆಯುವುದು ಮುಂತಾದ ಕೆಲಸಗಳಿಗೆ ನಿಯೋಜಿಸಲಾಯಿತು.
  ಒಮ್ಮೆ ವಿಲ್ಸನ್ ತಮ್ಮ ಪದವಿ ಪೂರ್ತಿಗೊಳಿಸಿದ ನಂತರ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಲು ಹೋದಾಗ ಬಯಸುವ ಹುದ್ದೆ ಕಾಲಂ ನಲ್ಲಿ ವಿಲ್ಸನ್ ಅವರನ್ನು ಕೇಳದಯೇ ಆ ಅಕಾರಿ ಮಲ ಹೊರುವುದು ಎಂದು ಬರೆದಿದ್ದನ್ನು ಗಮನಿಸಿದ ವಿಲ್ಸನ್, ಇದರಿಂದ ತೀವ್ರ ಆಕ್ರೋಶಗೊಂಡು ಅರ್ಜಿಯನ್ನೇ ಹರಿದು ಹಾಕಿ ಈ ದೇಶದಲ್ಲಿ ಈ ಕೆಲಸವೇ ಇಲ್ಲದಂತೆ ಮಾಡುವೆ ಎಂದು ಪ್ರತಿಜ್ಞೆ ಮಾಡಿ ಹೊರ ನಡೆದಿದ್ದನ್ನು ಅವರ ಜೊತೆಗಾರರು ಮತ್ತು ಮನೆಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
 ಅಂದು ಪ್ರಾರಂಭವಾದ ಬಿಜವಾಡ ವಿಲ್ಸನ್ ಹೋರಾಟ ಇಂದಿನವರೆಗೂ ಮುಂದುವರೆದುಕೊಂಡೇ ಬಂದಿದೆ. ನೀವು ನಮ್ಮ ಮಲ ಹೊರುವಿರಾ? ಎಂದು ಪ್ರಶ್ನಿಸಿದ ವಿಲ್ಸನ್ ದೇಶಾದ್ಯಂತ ಮಾನವ ಘನತೆ ಬದುಕು ನಿಮ್ಮ ಜನ್ಮ ಸಿದ್ಧ ಹಕ್ಕು ಎಂಬುದನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದು ಕ್ರಾಂತಿಯನ್ನೇ ಮಾಡಿದ್ದಾರೆ. ಮನುಷ್ಯನ ಆತ್ಮಗೌರವವನ್ನು ಪ್ರತಿಪಾದಿಸಿದ, ಮಾನವ ಘನತೆನ್ನು ಹೆಚ್ಚಿಸಿದ ಹೋರಾಟಗಾರ ಕೋಲಾರದ ಬಂಗಾರದ ಮನುಷ್ಯ ಬಿಜವಾಡ ವಿಲ್ಸನ್ ಕನ್ನಡ ಕುಡಿಯಾಗಿ ದೇಶಕ್ಕೆ ನೀಡಿದ ಈ ಕೊಡುಗೆ ಕನ್ನಡ ನಾಡು ಹೆಮ್ಮೆ ಪಡುವಂತದ್ದು. ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ರಥಕ್ಕೆ ಚಾಲನೆ ನೀಡುವಲ್ಲಿ ಇವರ ಈ ಸಾಧನೆ ಮುಂಚೂಣಿಗೆ ಬಂದರೆ ಅದು ಈ ದೇಶಕ್ಕೆ ಸಲ್ಲಿಸುವ ಮತ್ತೊಂದು ಗೌರವವಾಗಲಿದೆ.
ಕೃಪೆ : ವಾರ್ತಾಭಾರತಿ


ಚನೆಗಳನ್ನು ಗಟ್ಟಿಗೊಳಿಸಿಕೊಂಡರು. ತಮ್ಮ ಅನ್ನ ತಿನ್ನುವ ಕೈಗಳಿಂದ ಮಲಬಾಚುವವರು ಮನೆಯೊಳಗೆ ಬಂದಾಗ ಅಸಹ್ಯ ಪಡುತ್ತಿದ್ದವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದನ್ನು ವಿಲ್ಸನ್ ಸಹಿಸುತ್ತಿರಲಿಲ್ಲ. ಯಾರದೊ ಮಲವನ್ನು ತಮ್ಮ ಕೈಗಳಿಂದ ಬಾಚಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಅಕಾರಿಗಳಿಗೆ ಮಾನವೀಯತೆ ಇದೆಯಾ ಎಂದು ಪ್ರಶ್ನಿಸುತ್ತಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..? ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ

ಸಂಬಂಧ ಬೇರೂರುವ ಮುನ್ನ

ಒಂದೇ ಗರ್ಭದಲ್ಲಿ ಮೊಳಕೆಯೊಡೆದವರಲ್ಲ, ಕೂಡಿಬೆಳೆದವರಲ್ಲ, ಒಬ್ಬರಿಗೊಬ್ಬರು ಪರಿಚಯವಿಲ್ಲ. ಆದರೆ ಕಾಣದೆ ಇರುವ ವಿಧಿಯ ಹೆಸರಿನಲ್ಲಿ ಪರಸ್ಪರ ಸಂಧಿಸುವ ಮಾಗಿಯ ಕಾಲ ಬರುತ್ತದೆ. ಅವರ್ಯಾರೋ? ಇವರ್ಯಾರೋ? ಆಸೆಗಳು ವಿಭಿನ್ನ, ಗುರಿಯಂತೂ ಉತ್ತರಾಯಣ ದಕ್ಷಿಣಾಯನ. ನಸುನಗುವಿನಿಂದ ಕಸಿ ಕಟ್ಟುವ ಸ್ನೇಹ ಹೃದಯದಲ್ಲಿ ಬೇರನ್ನು ಬಿಟ್ಟು ಸಾಯುವವರೆಗೂ ನೆನಪಿನ ಫಲ ನೀಡುತ್ತದೆ. ಸತ್ತರೂ ಅದು ಅಮರವಾಗಿ ನಮ್ಮ ಆತ್ಮೀಯರ ಬಾಯಲ್ಲಿ ಪದವಾಗಿ ಹೊಮ್ಮುತ್ತದೆ. ಒಂದು ಸಣ್ಣ ಖುಷಿಗಾಗಿ ಗುಟುಕಿಸಿದ ಶುಗರ್‍ಲೆಸ್ ಟಿ ನಮ್ಮ ಬಾಳಿನ ತುಂಬಾ ಸಿಹಿಸಕ್ಕರೆಯಂತಾ ಅನುಭವವನ್ನು ತಂದೊಡ್ಡುತ್ತದೆ. ಗೆಳತನಕ್ಕೆ ಗಂಟು ಬಿದ್ದಾಗ ಹಸಿಮನಸ್ಸು ಅಂಟಿಕೊಂಡು ಮನೆಯವರ ನೆನಪು ಮರೆಯುವಂತೆ ಕುಳಿತ ಕಲ್ಲಿನಬೆಂಚಿಗೂ ಬೇಸರವಾಗುವಂತೆ ಅಲ್ಲಿ ಲೋಕಾಭಿರಾಮದ ಮಾತು ತುಂಬಾ ಅಪಾಯ್ಯಮಾನವಾಗಿರುತ್ತದೆ. ಅಲ್ಲಿ ಆಡಿದ ಮಾತು, ಮಾಡಿದ ಜಗಳ, ಬೇಸರವಾದಾಗ ನೆನಪಿನ ಅಂಗಳಕ್ಕೆ ತಂದಾಗ ತುಟಿಗಳು ತನ್ನಷ್ಟಕ್ಕಕ್ಕೆ ತಾನೇ ನಸುನಗುತ್ತವೆ. ತಪ್ಪಲ್ಲದ ತಪ್ಪಿಗೆ ಕಾಲು ಕೆರೆದುಕೊಂಡು ಮಗುವಿನಂತೆ ರಚ್ಚೆ ಹಿಡಿದು ಹುಸಿಮುನಿಸು ತೋರುವ ಮುಖದಲ್ಲಿ ಯಾವ ಲಜ್ಜೆಯೂ ಇಲ್ಲದೆ ಪುಟ್ಟ ಮಗುವಿನಂತೆ ನಗುವೊಂದು ಪುಟಿಯುತ್ತದೆ ಮೆಲ್ಲಗೆ. ಹಗಲುರಾತ್ರಿಯೆಲ್ಲಾ ಮೇಸೆಜ್ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಆಪ್ತರಾಗುವ ಕ್ರಿಯೆ ನೋಡನೋಡವಷ್ಟರಲ್ಲಿ ಗಾಡವಾದ ಸಂಬಂಧ ಬೆಳದು ಆಲದಮರದ ಬಿಳಲಿನಂತೆ ವಿ